ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ದತ್ತ ಜಯಂತಿ ಹಿನ್ನೆಲೆ : ಮಾಲಾಧಾರಿಗಳಿಂದ ಪಡಿಸಂಗ್ರಹ – ಸಂಜೆ ಶೋಭಾಯಾತ್ರೆ

ಚಿಕ್ಕಮಗಳೂರು ದತ್ತಜಯಂತಿ ಹಿನ್ನೆಲೆಯಲ್ಲಿಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ಮಾಲಾಧಾರಿಗಳು ಭಿಕ್ಷಾಟನೆ ನಡೆಸಿದರು.ಚಿಕ್ಕಮಗಳೂರು ನಗರದಲ್ಲಿ ಭಿಕ್ಷಾಟನೆ ಮೂಲಕ ಪಡಿಸಂಗ್ರಹ‌ ಮಾಡಿದರು.ದತ್ತ ಭಜನೆಯೊಂದಿಗೆ ನಾರಾಯಣಪುರ, ರಾಘವೇಂದ್ರ ಮಠದ ರಸ್ತೆಯಲ್ಲಿ  ಮನೆ-ಮನೆಗೆ ತೆರಳಿ ಭಿಕ್ಷಾಟನೆ ಮೂಲಕ ಪಡಿಸಂಗ್ರಹ ನಡೆಸಿದರುಪಡಿ ರೂಪದಲ್ಲಿ ಅಕ್ಕಿ, ಬೆಲ್ಲ, ಕಾಯಿಯನ್ನು ಸ್ಥಳೀಯರು ನೀಡಿದರು.ಸಂಗ್ರಹಿಸಿದ ಪುಡಿಯನ್ನು ನಾಳೆ ಇರುಮುಡಿ ರೂಪದಲ್ಲಿ ದತ್ತಾತ್ರೇಯರಿಗೆ  ಮಾಲಾಧಾರಿಗಳು ಅರ್ಪಿಸಲಿದ್ದಾರೆ.*ದತ್ತ ಜಯಂತಿ ಹಿನ್ನೆಲೆಯಲ್ಲಿ ಇಂದು ಸಂಜೆ ಚಿಕ್ಕಮಗಳೂರು ನಗರದಲ್ಲಿ ದತ್ತಮಾಲಾ ಧಾರಿಗಳ ಬೃಹತ್ ಶೋಭಾಯಾತ್ರೆ ನಡೆಯಲಿದೆ

ರಾಜ್ಯ ಕೆ.ಇ.ಎ. ಸಹಾಯಕ ಪ್ರಾಧ್ಯಾಪಕ ಹುದ್ದೆ : ರಾಜ್ಯಕ್ಕೆ 8ನೇ ರ‍್ಯಾಂಕ್ ಪಡೆದ  ಲಿತಿನ್

ಚಿಕ್ಕಮಗಳೂರು : ರಾಜ್ಯ ಕೆಇಎ ನಡೆಸಿದ ಪ್ರಾಧ್ಯಾಪಕರ ಹುದ್ದೆಗೆ  ಬಿ. ಎಂ .ಲಿತಿನ್8ನೇ ರಾಂಕ್ ಪಡೆದಿದ್ದಾರೆಇವರು ಮೂಡಿಗೆರೆ ತಾಲ್ಲೂಕು ಬಾಳೂರು ಹೊರಟ್ಟಿಯ ಅಡಿಗೆ ಮಲ್ಲೇಶ್ ಅವರ ಹಿರಿಯ ಪುತ್ರ .ಪ್ರಸ್ತುತ ಕಾರ್ಕಳದ ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದು ಪಿ ಎಚ್.ಡಿ ಪದವಿಯನ್ನು ಮಣಿಪಾಲ್ ನಲ್ಲಿ ಮುಗಿಸಿರುತ್ತಾರೆ.