ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ಬಿಜೆಪಿಯಲ್ಲಿ ಮುಂದುವರಿದ ಸಂಘರ್ಷ :  ರಾಜೀನಾಮೆ ವಾಪಸ್ ಪಡೆದ ನಗರಸಭೆ ಅಧ್ಯಕ್ಷರು !!

Share:

ಚಿಕ್ಕಮಗಳೂರು: ದಿಡೀರ್ ವಿದ್ಯಮಾನದಲ್ಲಿ ನಗರಸಭೆ ಅಧ್ಯಕ್ಷರು ತಮ್ಮ ರಾಜೀನಾಮೆಯನ್ನು ಹಿಂದಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಪಕ್ಷದ ಆಂತರಿಕ ಒಪ್ಪಂದದಂತೆ ನಗರಸಭೆ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇಂದು ಸಂಜೆ ಅಂಗೀಕಾರ ಆಗಬೇಕಾಗಿತ್ತು.
ಇದ್ದಕ್ಕಿದ್ದಂತೆ ಪಕ್ಷದೊಳಗೆ ನಡೆದ ವಿದ್ಯಮಾನದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ರಾಜೀನಾಮೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಅಧ್ಯಕ್ಷರು ರಾಜೀನಾಮೆ ಪಡೆದ ಸುದ್ದಿ ಹೊರಬೀಳುತ್ತಿದ್ದಂತೆ ಪಕ್ಷದ ಮುಖಂಡರು ಚುರುಕಾಗಿದ್ದು, ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯನವರ ಹೆಗಲಿಗೆ ಜವಾಬ್ದಾರಿ ವಹಿಸಿದ್ದಾರೆ.
ಕಡೂರಿನಲ್ಲಿ ಅಧ್ಯಕ್ಷರನ್ನು ಭೇಟಿ ಮಾಡಿದ ಮುತ್ತಯ್ಯ ಅವರನ್ನು ಕರೆತಂದಿದ್ದು, ಇದೀಗ ಜಿಲ್ಲಾಧಿಕಾರಿಗಳ ಕಚೇರಿಗೆ ಕರೆದೊಯ್ದು ರಾಜೀನಾಮೆ ಹಿಂದೆ ಪಡೆದ ಪತ್ರವನ್ನು ಹಿಂದಕ್ಕೆ ಪಡೆದು, ರಾಜೀನಾಮೆ “ಅಂಗೀಕಾರ” ಆಗುವಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ನಗರಸಭೆ ಅಧ್ಯಕ್ಷರ ಹಾವು – ಏಣಿ ಆಟ ಪಕ್ಷದ ನಿಷ್ಠಾವಂತರಲ್ಲಿ ಅಸಹ್ಯ ಮೂಡಿಸಿದ್ದು, ಅಧಿಕಾರ ಪಡೆಯುವ ಸಂದರ್ಭದಲ್ಲಿ ಒಂದು ರೀತಿ ನಂತರದಲ್ಲಿ ಒಂದು ರೀತಿ ನಡೆದುಕೊಳ್ಳುತ್ತಿರುವ ಸದಸ್ಯರ ವರ್ತನೆಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಮಾಜಿ ಸಚಿವರೂ ಆದ ವಿಧಾನಪರಿಷತ್ ಸದಸ್ಯ ಸಿ .ಟಿ. ರವಿ ಸೇರಿದಂತೆ ಪಕ್ಷದ ಪ್ರಮುಖ ಪದಾಧಿಕಾರಿಗಳು ಪಕ್ಷದಲ್ಲಿ ಹಿಡಿತ ಸಾಧಿಸುವಲ್ಲಿ ವಿಫಲರಾಗುತ್ತಿದ್ದಾರೆಯೇ ಎನ್ನುವ ಅನುಮಾನಗಳು ಕಾಡುತ್ತಿವೆ

Leave a Reply

Your email address will not be published. Required fields are marked *

On Key

Related Posts

ಬಿಜೆಪಿಯಲ್ಲಿ ಮುಂದುವರಿದ ಸಂಘರ್ಷ :  ರಾಜೀನಾಮೆ ವಾಪಸ್ ಪಡೆದ ನಗರಸಭೆ ಅಧ್ಯಕ್ಷರು !!

ಚಿಕ್ಕಮಗಳೂರು: ದಿಡೀರ್ ವಿದ್ಯಮಾನದಲ್ಲಿ ನಗರಸಭೆ ಅಧ್ಯಕ್ಷರು ತಮ್ಮ ರಾಜೀನಾಮೆಯನ್ನು ಹಿಂದಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಪಕ್ಷದ ಆಂತರಿಕ ಒಪ್ಪಂದದಂತೆ ನಗರಸಭೆ ಅಧ್ಯಕ್ಷರು

ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ :  ಸಂಚಾರಿ ನಿಯಮ ಉಲ್ಲಂಘನೆ –  ದ್ವಿಚಕ್ರ ವಾಹನ ಚಾಲಕನಿಗೆ 14 ಸಾವಿರ ದಂಡ

ಚಿಕ್ಕಮಗಳೂರು: ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ , ಹಲವು ಸಂಚಾರಿ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಚಾಲಕನಿಗೆ

ರೈತರ ಸಮಾವೇಶ : ರೈತ–ಅರಣ್ಯ ಇಲಾಖೆ ಸಂಘರ್ಷ ತಪ್ಪಿಸಲು ಒಕ್ಕೊರಲ ಆಗ್ರಹ

ಚಿಕ್ಕಮಗಳೂರು: ಅರಣ್ಯ ಕಾಯ್ದೆಗಳ ಹೆಸರಿನಲ್ಲಿ ಜಿಲ್ಲೆಯ ರೈತರ ಬದುಕನ್ನು ಅರಣ್ಯ ಇಲಾಖೆ ಕಸಿದು ಕೊಳ್ಳುತ್ತಿದ್ದು ಅಂತಹ ಕಾಯ್ದೆಗಳನ್ನು ರದ್ದುಪಡಿಸಬೇಕು, ರೈತರನ್ನು

ಟ್ರಕ್ಕಿಂಗ್ : ದಾರಿ ತಪ್ಪಿದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು -ಮಧ್ಯರಾತ್ರಿ ಪತ್ತೆ

ಚಿಕ್ಕಮಗಳೂರು : ಟ್ರಕ್ಕಿಂಗ್ ಹೊರಟ ಮೆಡಿಕಲ್ ಕಾಲೇಜು11 ವಿದ್ಯಾರ್ಥಿಗಳು ದಾರಿ ತಪ್ಪಿದ ಘಟನೆ ನಡೆದಿದೆ. ಬಲ್ಲಾಳರಾಯನ ದುರ್ಗಾ ಕಾಡಲ್ಲಿ ನಿತ್ರಾಣಗೊಂಡಿದ್ದ