ಚಿಕ್ಕಮಗಳೂರು :ವಿಪರೀತ ಮಳೆ ಹಿನ್ನೆಲೆ ಯಲ್ಲಿ ಬೈಕ್ ಸವಾರನ ಮೇಲೆ ಮರದ ಕೊಂಬೆ ಬಿದ್ದು ಸಾವಪ್ಪಿದ ಘಟನೆ ನಡೆದಿದೆ.
ಬಾಳೆಹೊನ್ನೂರು ರಸ್ತೆ ಎಲೆಕಲ್ಲು ಸಮೀಪ ಮರದ ಕೊಂಬೆಯೊಂದು ಬೈಕ್ ಸವಾರನ ಮೇಲೆ ಬಿದ್ದು ತೀವ್ರತರವಾಗಿ ಗಾಯಗೊಂಡಿದ್ದ.
ಮಾಹಿತಿ ಬಂದ ಕೂಡಲೇ ಪಿಎಸ್ಐ ಬಾಳೆಹೊನ್ನೂರು ಹಾಗೂ ಸಿಬ್ಬಂದಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸಹಯೋಗದೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಗಾಯಗೊಂಡ ಕಡಬಗೆರೆ ನಿವಾಸಿ (ಬಿಳುಕೊಪ್ಪ) ಅನಿಲ್ ರುಜಾರಿಯೋರನ್ನು ಕೂಡಲೇ ಬಾಳೆಹೊನ್ನೂರು ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೀವ್ರ ಗಾಯಗೊಂಡಿದ್ದ ಅನಿಲ್ ರುಜಾರಿಯೋ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ
