ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ಮೀಸಲು ಅರಣ್ಯ ಭೂಮಿ ಒತ್ತುವರಿ ಆರೋಪ :  ಪ್ರಕರಣ ದಾಖಲು

Share:

ಚಿಕ್ಕಮಗಳೂರು : ಮೀಸಲು ಅರಣ್ಯ ಭೂಮಿ ಒತ್ತುವರಿ ಮಾಡಿ ಕೃಷಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಲೈಫ್ ಲೈನ್ ಫೀಡ್ ಸಂಸ್ಥೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಮುರಾರಿ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದೆ.
ಸಾರ್ವಜನಿಕ ದೂರು ಆಧರಿಸಿ ಸ್ಥಳಕ್ಕೆ ತೆರಳಿದ ಅರಣ್ಯ ಸಿಬ್ಬಂದಿ ಸ್ಥಳ ಮಹಜರು ನಡೆಸಿ ಒತ್ತುವರಿಯನ್ನು ಖಚಿತಪಡಿಸಿದೆ. ಅರಣ್ಯ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕಳಸಾಪುರ ಉಪ ವಲಯ ಅರಣ್ಯ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
ಈ ವರದಿ ಆಧರಿಸಿ ಲೈಫ್ ಲೈನ್ ಸಂಸ್ಥೆಯ ಪರವಾಗಿ 21 ಎಕರೆ ಅನಧಿಕೃತವಾಗಿ ಜಮೀನು ಪಡೆದಿರುವ ಮುರಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಮಧ್ಯೆ ಚಿಕ್ಕಮಗಳೂರು ವಲಯದ ಕಳಸಾಪುರ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ಕ್ಯಾತನಬೀಡು ಗ್ರಾಮದ ಸರ್ಕಾರಿ ಸ.ನಂ-90ರಲ್ಲಿ ನೀಡಲಾಗಿರುವ ಅನಧಿಕೃತ ಕಂದಾಯ ಮಂಜೂರಾತಿಗಳನ್ನು ರದ್ದುಗೊಳಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಅರಣ್ಯ ಇಲಾಖೆ ಪತ್ರ ಬರೆದಿದೆ.
ಚಿಕ್ಕಮಗಳೂರು ವಲಯದ
ಮೀಸಲು ಅರಣ್ಯ” ಪ್ರದೇಶದ ವ್ಯಾಪ್ತಿಯಲ್ಲಿ ಸರ್ಕಾರದ ಅಧಿಸೂಚನೆ ಸಂಖ್ಯೆ: G2965 -FT.116-36-3 Dt:06-11-
1936ರಂತೆ ಕ್ಯಾತನಬೀಡು ಗ್ರಾಮದ ಸ.ನಂ. 90 ರಲ್ಲಿ ಒಟ್ಟು180 ಎಕರೆ ಪ್ರದೇಶವನ್ನು “ಕಳಸಾಪುರ ಮೀಸಲು
ಅರಣ್ಯ ” ಎಂದು ಅಂತಿಮ ಅಧಿಸೂಚನೆಯಾಗಿದೆ.
ಈ ಪ್ರದೇಶವು ಕಂದಾಯ ಇಲಾಖೆಯ ಪಹಣಿಯಲ್ಲಿ ಇಂಡೀಕರಣವಾಗಿದೆ. ಪ್ರಸ್ತುತ ಕಂದಾಯ ಇಲಾಖಾ ಪಹಣಿಯಂತೆ ಪರಿಶೀಲಿಸಿದಾಗ ಸ.ನಂ.90 ರಲ್ಲಿ ಒಟ್ಟು 310 ಪ್ರದೇಶವಿದ್ದು ಕಲಂ 9 ರಂತೆ 170-03 ಎ-ಗುಂ ಪ್ರದೇಶ ಮೀಸಲು ಅರಣ್ಯ ಎಂದು ನಮೂದಾಗಿದೆ.
ಉಳಿದ 180 ಎಕರೆ ಜಾಗ
ವಿಸ್ತೀರ್ಣ ಖಾಸಗಿಯವರಿಗೆ ಮಂಜೂರಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಕ್ಯಾತನ ಬಿಡು ಗ್ರಾಮದ ಒಟ್ಟು 180 ಎಕರೆ ಪ್ರದೇಶವನ್ನು “ಕಳಸಾಪುರ ಮೀಸಲು ಅರಣ್ಯ ಎಂಬುದಾಗಿ ಅಂತಿಮ
ಅಧಿಸೂಚನೆಯಲ್ಲಿ ಘೋಷಣೆ ಮಾಡಲಾಗಿದೆ ಎಂದು ಗಮನಕ್ಕೆ ತಂದಿದ್ದಾರೆ.
ಉಲ್ಲೇಖಿತ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಇಲಾಖೆಯ ಗಮನಕ್ಕೆ ಬಾರದಂತೆ ಅರಣ್ಯ
ಸ೦ರಕ್ಷಣಾ) ಕಾಯಿದೆ -1980 ರ ಕಲಂ-2 ನ್ನು ಉಲ್ಲಂಘಿಸಿ ಅನುಮೋದಿಸಿ ಲೈಫ್ ಲೈನ್ ಫೀಡ್ ಸಂಸ್ಥೆಯ ಪರವಾಗಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಮುರಾರಿ ಸೇರಿದಂತೆ ಹಲವರಿಗೆ ಜಮೀನು ಮಂಜೂರು ಮಾಡಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ತನುಜಕುಮಾರ್.ಎನ್.ವಿ
ಪತ್ರ ಬರೆದಿದ್ದಾರೆ.
ಈ ಪ್ರಕರಣದಲ್ಲಿ ಚಿಕ್ಕಮಗಳೂರು ತಹಸೀಲ್ದಾರ್ ಹಾಗೂ
ಲೈಪ್‌ ಲೈನ್ ಫಿಡ್ಸ್ (ಇಂಡಿಯಾ) ಪ್ರೈ ಲಿ ನ
ಪರವಾಗಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಮುರಾರಿರವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

Leave a Reply

Your email address will not be published. Required fields are marked *

On Key

Related Posts