ಚಿಕ್ಕಮಗಳೂರಿನಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ದೃಢ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 22 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ. ಕೇರಳದ ಕೊಚ್ಚಿಯಲ್ಲಿ ಕೆಲಸ ಮಾಡುತ್ತಿದ್ದ ಈ ಯುವಕ, ರಜೆಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿಗೆ ಆಗಮಿಸಿದ್ದರು. ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಕಾರಣ, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಆತನ ಸ್ವಾಬ್ ಸ್ಯಾಂಪಲ್ ತೆಗೆದು, ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆರೋಗ್ಯ ಇಲಾಖೆಯ ಅಧಿಕೃತ ಹೆಲ್ತ್ ಬುಲೆಟಿನ್ ಪ್ರಕಾರ, ಈ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಯುವಕ ಚಿಕ್ಕಮಗಳೂರು ನಗರದ ನಿವಾಸಿಯಾಗಿದ್ದು, ಪ್ರಸ್ತುತ […]
ಜನಪರ ಹೋರಾಟಗಾರನ ನನಸಾಗದ ಕನಸಿನ ಮನೆ : ನೆರವಿಗೆ ಮನವಿ

ಚಿಕ್ಕಮಗಳೂರು: ಜನಪರ ಹೋರಾಟದ ಮೂಲಕ ಬದುಕನ್ನು ಕಟ್ಟಿಕೊಂಡು, ತನ್ನೆಲ್ಲ ಆಸೆಗಳನ್ನು ಬದುಗಿರಿಸಿ ಕಾಡು ಸೇರಿ ನಂತರ ನಾಡಿಗೆ ಮರಳಿದ ನಿಲಗುಳಿ ಪದ್ಮನಾಭ ಪದ್ಮನಾಭ್ ನೆರವಿಗಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಶಾಸಕರು ಸೇರಿದಂತೆ ಹಿತೈಷಿಗಳು ನೀಡಿದ ಭರವಸೆಗಳು “ಹುಸಿ”ಯಾಗಿದ್ದು ಬದುಕು ಬೀದಿಗೆ ಬಂದು ನಿಂತಿದೆ. ಶರಣಾಗತಿ ಪ್ಯಾಕೇಜ್ ಗಗನ ಕುಸುಮವಾಗಿದೆ. ಕೊಪ್ಪದಲ್ಲಿ ವಾಸ್ತವಿರುವ ನೀಲಗುಳಿ ಪದ್ಮನಾಭ್ ಬಹಿರಂಗ ಪ್ರಜಾತಾಂತ್ರಿಕ ಜೀವನಕ್ಕೆ ಮರಳಿ ಬದನಂತರ ತಮ್ಮೂರಿನಲ್ಲಿ ಒಂದು ಸಣ್ಣ ಗುಡಿಸಲು ಮನೆ ನಿರ್ಮಿಸಿಕೊಂಡು ವಾಸವಿದ್ದಾರೆ. ಕಳೆದ ವರ್ಷ ಸುರಿದ ಅತಿ […]
ಚಾರ್ಮಾಡಿ ಘಾಟಿಯಲ್ಲಿ ಗಾಳಿ-ಮಳೆ : ಉರುಳಿದ ಮರ ತಪ್ಪಿದ ಭಾರಿ ಅನಾಹುತ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮಳೆಯೊಡನೆ ತೀವ್ರ ಗಾಳಿ ಬಲವಂತಗೊಂಡ ಪರಿಣಾಮ, ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಚಾರ್ಮಾಡಿ ಘಾಟ್ನಲ್ಲಿ ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ನಡೆದ ಈ ಘಟನೆ ನಡೆದಿದ್ದು ಆತಂಕ ಉಂಟುಮಾಡಿತ್ತು. ಧರ್ಮಸ್ಥಳದಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು ರಸ್ತೆಯಲ್ಲಿ ಸಾಗುತ್ತಿದ್ದ ಸಮಯದಲ್ಲಿ ಅಚಾನಕ್ಕಾಗಿ ದೊಡ್ಡ ಮರ ಕಾರು ಪಾಸ್ ಆದ ತಕ್ಷಣವೇ ಮುರಿದು ಬಿದ್ದಿದೆ. ಕೊಟ್ಟಿಗೆಹಾರ ಗ್ರಾಮದ ಯುವಕರು ಹಾಗೂ ಬಣಕಲ್ ಪೊಲೀಸ್ ಠಾಣೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ […]
45 ವರ್ಷಕ್ಕೆ ಮಗು ಹೆತ್ತು ಮಾರಾಟ ಮಾಡಿ ಲಾಕ್ ಆದ ದಂಪತಿ ; ನಿವೃತ್ತ ನರ್ಸ್ ಸಹಕಾರ

ಚಿಕ್ಕಮಗಳೂರು : ಹೆಣ್ಣು ಮಗುವನ್ನು ಮಾರಿ ಪೊಲೀಸರಿಗೆ ಅತಿಥಿಯಾದ ಘಟನೆ ಎನ್.ಆರ್.ಪುರ ತಾಲೂಕಿನ ಹರಾವರಿ ಗ್ರಾಮದಲ್ಲಿ ನಡೆದಿದೆ. ರತ್ನ-ಸದಾನಂದ ಮಗು ಮಾರಿ ಪೊಲೀಸರಿಗೆ ಅತಿಥಿಯಾದ ದಂಪತಿ ,ಮಗು ಮಾರಾಟಕ್ಕೆ ಸಹಕರಿಸಿದ ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಕುಸುಮ ಬಂಧನಕ್ಕೆ ಒಳಗಾಗಿದ್ದಾರೆ ನಿವೃತ್ತ ನರ್ಸ್ ಸಹೋದರ ಕಾರ್ಕಳದ ರಾಘವೇಂದ್ರ ಎಂಬುವರಿಗೆ 2 ದಿನದ ಮಗುವನ್ನು 1 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಎನ್.ಆರ್. ಪುರ ಪೊಲೀಸರಿಂದ ಮಗು ರಕ್ಷಣೆ ಮಾಡಿದ್ದು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ಮಗುವನ್ನು ಒಪ್ಪಿಸಲಾಗಿದೆ. […]
ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ : ಮೂವರ ಬಂಧನ – 38,000 ನಗದು ವಶ

ಚಿಕ್ಕಮಗಳೂರು: ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಮೋವರನ್ನು ಬಂಧಿಸಿ 38,000ರೂ, ಪೋರ್ಡ್ ಪಿಗೋ ಕಾರ್ , ಹಾಗೂ 4 ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಜ್ಜಂಪುರ ಪಟ್ಟಣದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದ ಅಡ್ಡೆ ಮೇಲೆ ದಾಳಿ ಮಾಡಿ ಅಜ್ಜಂಪುರದ ಸಾಗರ, ಗಗನ್ ಎಸ್ ಹಾಗೂ ಇನ್ನೋರ್ವ ಗಗನ್ ರನ್ನು ಬಂಧಿಸಿ ಆರೋಪಿಗಳಿಂದ ಒಟ್ಟು 38.000/- ರೂ ನಗದು , ಕೆಎ-03-ಎಂ.ಎಂ.-7395 ಪೋರ್ಡ್ ಪಿಗೋ ಕಾರ್ ಅಂದಾಜು ಮೌಲ್ಯ 3 ಲಕ್ಷ ರೂ. […]
ಗುಡ್ಡಹಟ್ಟಿ ಅರಣ್ಯ ನೆಡುತೋಪಿನಲ್ಲಿ ಮರಗಳ ಕಳವು -ಅರಣ್ಯ ಇಲಾಖೆ ಸಿಬ್ಬಂದಿ ಕೈವಾಡ ಶಂಕೆ

ಚಿಕ್ಕಮಗಳೂರು ಪ್ರಾದೇಶಿಕ ಅರಣ್ಯ ವಿಭಾಗದ ,ಮೂಡಿಗೆರೆ ವಲಯದ ,ಬಣಕಲ್ ಸರ್ವೇ ನಂಬರ್ 254ರ ಗುಡ್ಡಹಟ್ಟಿ ಇಲಾಖಾ ಅರಣ್ಯ ನೆಡುತೋಪು ನಲ್ಲಿ ಕಾಡು ಮರಗಳ ಕಳವು ಪ್ರಕರಣ ವರದಿಯಾಗಿದೆ. ಇಲ್ಲಿನ ಹಲವಾರು ಅಕೇಶಿಯಾ ಮರಗಳಗಳನ್ನು ಕಡಿದು ಕದ್ದು ಸಾಗಿಸಲಾಗಿದೆ.ಮರಗಳನ್ನು ಕದ್ದು ಸಬಣಕಲ್ ಟೌನ್ ನಲ್ಲಿನ ಸಾಮಿಲ್ ಗೆ ಸಾಗಿಸುವಲ್ಲಿ ಇಬ್ಬರು ಸಿಬ್ಬಂದಿ ಶಾಮಿಲಾ ಗಿದ್ದಾರೆ ಖಚಿತ ಮಾಹಿತಿ ಮೇರೆಗೆ ಮೂಡಿಗೆರೆ ವಲಯ ಅರಣ್ಯಾಧಿಕಾರಿ ಕಾವ್ಯಬಣಕಾಲ್ ಸಾಮೀಲ್ ಗೆ ತೆರಳಿ ಪರಿಶೀಲಿಸಿ ಕಾಡು ಮರಗಳನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆ […]
ಚಿಕ್ಕಮಗಳೂರು: ಕಾಫಿನಾಡಲ್ಲಿ ಮಳೆ ಅಬ್ಬರ – ಸಿಡಿಲಿಗೆ ಕುರಿಗಾಯಿ ಬಲಿ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಸಿಡಿಲು ಬಡಿದ ಪರಿಣಾಮ ಕುರಿಗಾಹಿ ಮೃತಪಟ್ಟಿರುವ ದುಃಖದ ಘಟನೆ ನಡೆದಿದೆ. ಕಡೂರು ತಾಲೂಕಿನ ಗೆದ್ಲೆಹಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ಕುರಿಗಳನ್ನು ಕಾಯುತ್ತಿದ್ದ ಲೋಕೇಶಪ್ಪ (ವಯಸ್ಸು 48) ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದುರಂತವಾದ ಘಟನೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಚಿಕ್ಕಮಗಳೂರು : ಲಂಚ ಪಡೆಯುತ್ತಿದ್ದ ತಾ.ಪಂ ತಾಂತ್ರಿಕ ಸಹಾಯಕಿ ವೆಂಕಿಬಾಯಿ ಲೋಕಾಯುಕ್ತ ಬಲೆಗೆ

ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಇನ್ನೊಂದು ಎಚ್ಚರಿಕೆಯ ಘಟನೆ ಬೆಳಕಿಗೆ ಬಂದಿದೆ. ಅಜ್ಜಂಪುರ ತಾ.ಪಂನಲ್ಲಿ ತಾಂತ್ರಿಕ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೆಂಕಿಬಾಯಿ, ಕೃಷಿ ಹೊಂಡ ಕೊರೆಸುವ ಸಲುವಾಗಿ ರೈತನೊಬ್ಬನಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಖಚಿತವಾಗಿದೆ. ನಾಗವಂಗಲದ ಕೃಷಿಕನೊಬ್ಬರಿಂದ ರೂ. 5500 ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವೆಂಕಿಬಾಯಿಯನ್ನು ಬಂದಿದ್ದಾರೆ. ತಾ.ಪಂ ಕಚೇರಿಯೊಳಗೇ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ವೆಂಕಿಬಾಯಿ ಲಂಚ ಸ್ವೀಕರಿಸುತ್ತಿರುವ ವೇಳೆ ಸಿಕ್ಕಿಬಿದ್ದಿದ್ದಾರೆ. ಈ […]
ನೂರಾರು ಪುರಾತನ ಮರಗಳ ತೆರವಿಗೆ ಸಿದ್ಧತೆ-ಮರಗಳ ರಕ್ಷಣೆಗೆ ಒತ್ತಾಯ

ಚಿಕ್ಕಮಗಳೂರು : ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ 200ಕ್ಕೂ ಹೆಚ್ಚು ಪುರಾತನ ಕಾಲದ ಐತಿಹಾಸಿಕ ಮರಗಳ ತೆರವು ಮಾಡಬೇಕಿದೆ ಎಂದು ಲೋಕೋಪಯೋಗಿ ಇಲಾಖೆ ಪ್ರಸ್ತಾವನೆಯನ್ನು ಅರಣ್ಯ ಇಲಾಖೆಗೆ ಸಲ್ಲಿಸಿದೆ. ಸಖರಾಯಪಟ್ಟಣ ದಿಂದ ಕಬ್ಬಳ್ಳಿ ಗ್ರಾಮದ ಬಾಣಾವರ ಗಡಿವರೆಗೂ ರಸ್ತೆ ಮೇಲ್ದರ್ಜೆಗೇರಿಸಿ ನೂತನ ಡಾಂಬರು ರಸ್ತೆಯಾಗಿದ್ದು ,ಡಾಂಬರು ರಸ್ತೆ ಬದಿಯ ಮರಗಳ ಸಮೀಪಕ್ಕೆ ಹಾಕಿದ್ದು ,ರಸ್ತೆ ಹಾಳಾಗುತ್ತದೆ ಎಂದು , ರಸ್ತೆ ಬದಿ ಇರುವ ಮರಗಳ ತೆರವಿಗೆ ಸಿದ್ಧತೆ ಸಾಗಿದೆ ಜಿಲ್ಲೆಯಲ್ಲಿ ಈಗಾಗಲೇ ಅನೇಕ ರಸ್ತೆ ಬದಿಯ ಸಮೃದ್ಧಿಯಿಂದ ಕೂಡಿದ […]
ಹೊರನಾಡಿನಲ್ಲಿ ವೆಂಕಟಸುಬ್ಬಾ ಜೋಯಿಸ್ ಮತ್ತು ನರಸಮ್ಮ ಸ್ಮರಣೆ ಕಂಚಿನ ಪುತ್ಥಳಿ ಅನಾವರಣ

ಚಿಕ್ಕಮಗಳೂರು: ಕಳಸ ತಾಲ್ಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಆವರಣದಲ್ಲಿ ದಿ.ಡಿ.ಬಿ.ವೆಂಕಟಸುಬ್ಬಾ ಜೋಯಿಸ್ ಮತ್ತು ಶ್ರೀಮತಿ ನರಸಮ್ಮ ವೆಂಕಟಸುಬ್ಬಾ ಜೋಯಿಸ್ ಅವರ ಕಂಚಿನ ಪುತ್ಥಳಿಗಳನ್ನು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅನಾವರಣಗೊಳಿಸಿದರು. ಲಲಿತಾ ಕಲಾಮಂಟಪದಲ್ಲಿ ನಡೆದ ಗ್ರಾಮೀಣಾಭಿವೃದ್ದಿ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯಪಾಲರು ಶ್ರೀಕ್ಷೇತ್ರದಲ್ಲಿ ಜಿ.ಭೀಮೇಶ್ವರ ಜೋಷಿಯವರ ಅಜ್ಜ ದಿ. ಹಣಡಿ.ಬಿ.ವೆಂಕಸುಬ್ಬಾ ಜೋಯಿಸ್ ಮತ್ತು ಅವರ ಧರ್ಮಪತ್ನಿ ನರಸಮ್ಮ ವೆಂಕಟಸುಬ್ಬಾ ಜೋಯಿಸ್ ಅವರ ಪ್ರತಿಮೆ ಲೋಕಾರ್ಪಣೆ ಮಾಡುವ ಭಾಗ್ಯ ನನ್ನದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ […]