ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ನೂರಾರು ಪುರಾತನ ಮರಗಳ ತೆರವಿಗೆ ಸಿದ್ಧತೆ-ಮರಗಳ  ರಕ್ಷಣೆಗೆ ಒತ್ತಾಯ

Share:

ಚಿಕ್ಕಮಗಳೂರು : ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ 200ಕ್ಕೂ ಹೆಚ್ಚು ಪುರಾತನ ಕಾಲದ ಐತಿಹಾಸಿಕ ಮರಗಳ ತೆರವು ಮಾಡಬೇಕಿದೆ ಎಂದು ಲೋಕೋಪಯೋಗಿ ಇಲಾಖೆ ಪ್ರಸ್ತಾವನೆಯನ್ನು ಅರಣ್ಯ ಇಲಾಖೆಗೆ ಸಲ್ಲಿಸಿದೆ.
ಸಖರಾಯಪಟ್ಟಣ ದಿಂದ ಕಬ್ಬಳ್ಳಿ ಗ್ರಾಮದ ಬಾಣಾವರ ಗಡಿವರೆಗೂ ರಸ್ತೆ ಮೇಲ್ದರ್ಜೆಗೇರಿಸಿ ನೂತನ ಡಾಂಬರು ರಸ್ತೆಯಾಗಿದ್ದು ,ಡಾಂಬರು ರಸ್ತೆ ಬದಿಯ ಮರಗಳ ಸಮೀಪಕ್ಕೆ ಹಾಕಿದ್ದು ,ರಸ್ತೆ ಹಾಳಾಗುತ್ತದೆ ಎಂದು , ರಸ್ತೆ ಬದಿ ಇರುವ ಮರಗಳ ತೆರವಿಗೆ ಸಿದ್ಧತೆ ಸಾಗಿದೆ
ಜಿಲ್ಲೆಯಲ್ಲಿ ಈಗಾಗಲೇ ಅನೇಕ ರಸ್ತೆ ಬದಿಯ ಸಮೃದ್ಧಿಯಿಂದ ಕೂಡಿದ ಪುರಾತನ ಮರಗಳನ್ನು ಕಡಿದ ಪರಿಣಾಮ ಬಿಸಿಲು ಹೆಚ್ಚಾಗಿ, ಹವಮಾನ ವೈಪರಿತ್ಯಕ್ಕೆ ಕಾರಣವಾಗಿದೆ.
ಕೆಲ ವರ್ಷಗಳ ಹಿಂದೆ ಚಿಕ್ಕಮಗಳೂರು ನಗರದಿಂದ ಕೈಮರ,ಹೊಸಪೇಟೆವರೆಗೂ ರಸ್ತೆ ಬದಿಯ ಮರಗಳ ತೆರವು ಮಾಡುವಂತೆ ಪ್ರಸ್ತಾವನೆ ಇತ್ತು,ಅದನ್ನು ಪರಿಸರ ಪ್ರಿಯರು ತೀವ್ರವಾಗಿ ವಿರೋಧಿಸಿದ ಕಾರಣಕ್ಕೆ ,ತೆರವು ಮಾಡದೆ ಮರಗಳನ್ನು ರಕ್ಷಣೆ ಮಾಡಿರುವ ಉದಾಹರಣೆ ಇದೆ.
ಸಖರಾಯಪಟ್ಟಣದಿಂದ ಕಬ್ಬಳಿ ಗ್ರಾಮದ ಬಾಣಾವರ ಗಡಿವರೆಗೆ ಇರುವ 200 ರಕ್ಕೂ ಹೆಚ್ಚು ಪುರಾತನ ಮರಗಳ ತೆರವಿಗೆ ಪರಿಸರ ಪ್ರಿಯರು ಕಳವಳ ವ್ಯಕ್ತಪಡಿಸಿ ಮರಗಳಿಂದ ರಸ್ತೆಗೆ ತೊಂದರೆ ಇಲ್ಲ ಎನ್ನುವುದು ಸ್ಥಳೀಯರ ವಾದ.ಟಿಂಬರ್ ತೆಗೆಯಲು ಈ ರೀತಿ ಪ್ಲಾನ್ ಮಾಡಲಾಗುತ್ತಿದೆ ಎನ್ನಲಾಗಿದೆ .
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿ ಅಮೂಲ್ಯ ಮರಗಳನ್ನು ಉಳಿಸಬೇಕೆಂದು ಪರಿಸರಾಸಕ್ತ ಜಿ ವೀರೇಶ್ ಒತ್ತಾಯ ಮಾಡಿದ್ದಾರೆ.

50 ಕ್ಕಿಂತಲೂ ಹೆಚ್ಚು ಮರಗಳನ್ನು ತೆರವು ಮಾಡಬೇಕಾದರೆ ಸಾರ್ವಜನಿಕರ ಅಹವಾಲು, ಆಕ್ಷೇಪಣೆ ಗಳೆನಾದರೂ ಇದೆಯೇ ಎಂದು ಸಭೆ ಕರೆಯಬೇಕು ಮೇ.13 ರಂದು ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದೆ.

Leave a Reply

Your email address will not be published. Required fields are marked *

On Key

Related Posts

ಚಿಕ್ಕಮಗಳೂರು : ಲಂಚ ಪಡೆಯುತ್ತಿದ್ದ ತಾ.ಪಂ ತಾಂತ್ರಿಕ ಸಹಾಯಕಿ ವೆಂಕಿಬಾಯಿ ಲೋಕಾಯುಕ್ತ ಬಲೆಗೆ

ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಇನ್ನೊಂದು ಎಚ್ಚರಿಕೆಯ ಘಟನೆ ಬೆಳಕಿಗೆ ಬಂದಿದೆ. ಅಜ್ಜಂಪುರ ತಾ.ಪಂನಲ್ಲಿ