ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ಗುಡ್ಡಹಟ್ಟಿ ಅರಣ್ಯ ನೆಡುತೋಪಿನಲ್ಲಿ ಮರಗಳ ಕಳವು -ಅರಣ್ಯ ಇಲಾಖೆ ಸಿಬ್ಬಂದಿ ಕೈವಾಡ ಶಂಕೆ

Share:

ಚಿಕ್ಕಮಗಳೂರು ಪ್ರಾದೇಶಿಕ ಅರಣ್ಯ ವಿಭಾಗದ ,ಮೂಡಿಗೆರೆ ವಲಯದ ,ಬಣಕಲ್ ಸರ್ವೇ ನಂಬರ್ 254ರ ಗುಡ್ಡಹಟ್ಟಿ ಇಲಾಖಾ ಅರಣ್ಯ ನೆಡುತೋಪು ನಲ್ಲಿ ಕಾಡು ಮರಗಳ ಕಳವು ಪ್ರಕರಣ ವರದಿಯಾಗಿದೆ.
ಇಲ್ಲಿನ ಹಲವಾರು ಅಕೇಶಿಯಾ ಮರಗಳಗಳನ್ನು ಕಡಿದು ಕದ್ದು ಸಾಗಿಸಲಾಗಿದೆ.ಮರಗಳನ್ನು ಕದ್ದು ಸಬಣಕಲ್ ಟೌನ್ ನಲ್ಲಿನ ಸಾಮಿಲ್ ಗೆ ಸಾಗಿಸುವಲ್ಲಿ ಇಬ್ಬರು ಸಿಬ್ಬಂದಿ ಶಾಮಿಲಾ ಗಿದ್ದಾರೆ
ಖಚಿತ ಮಾಹಿತಿ ಮೇರೆಗೆ ಮೂಡಿಗೆರೆ ವಲಯ ಅರಣ್ಯಾಧಿಕಾರಿ ಕಾವ್ಯ‌ಬಣಕಾಲ್ ಸಾಮೀಲ್ ಗೆ ತೆರಳಿ ಪರಿಶೀಲಿಸಿ ಕಾಡು ಮರಗಳನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆ ಮಾಡುತ್ತಿದ್ದಾರೆ.
ಸಾಮಿಲ್ ಮಾಲೀಕ ಮೂರ್ತಿ ಹೇಳುವ ಪ್ರಕಾರ ಇಲಾಖೆ ಸಿಬ್ಬಂದಿಗಳೇ ಇದನ್ನು ತಂದು ಕೊಟ್ಟು ಕಟಾವು ಮಾಡಿಕೊಡಲು ಹೇಳಿದ್ದಾರೆ ಎನ್ನಲಾಗಿದೆ.
ಕ್ರಮ ಕೈಗೊಳ್ಳಬೇಕು,:ಪ್ರಕರಣ ಮುಚ್ಚಿಹಾಕುವ ಹುನ್ನಾರ ?
ರೈತರು ಗೂಟಕ್ಕೆ ಮರ ಕಡಿದರೆ ಪ್ರಕರಣ ದಾಖಲು ಮಾಡುವ ಇಲಾಖೆ ,ಇಲ್ಲಿ ಸಿಬ್ಬಂದಿಗಳನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ ಎನ್ನುವ ಆರೋಪವು ಕೇಳಿ ಬಂದಿದೆ.
ತಪ್ಪಿತಸ್ಥ ಸಿಬ್ಬಂದಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

Leave a Reply

Your email address will not be published. Required fields are marked *

On Key

Related Posts

ಚಿಕ್ಕಮಗಳೂರು : ಲಂಚ ಪಡೆಯುತ್ತಿದ್ದ ತಾ.ಪಂ ತಾಂತ್ರಿಕ ಸಹಾಯಕಿ ವೆಂಕಿಬಾಯಿ ಲೋಕಾಯುಕ್ತ ಬಲೆಗೆ

ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಇನ್ನೊಂದು ಎಚ್ಚರಿಕೆಯ ಘಟನೆ ಬೆಳಕಿಗೆ ಬಂದಿದೆ. ಅಜ್ಜಂಪುರ ತಾ.ಪಂನಲ್ಲಿ