ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ಟ್ರಕ್ಕಿಂಗ್ : ದಾರಿ ತಪ್ಪಿದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು -ಮಧ್ಯರಾತ್ರಿ ಪತ್ತೆ

Share:

ಚಿಕ್ಕಮಗಳೂರು : ಟ್ರಕ್ಕಿಂಗ್ ಹೊರಟ ಮೆಡಿಕಲ್ ಕಾಲೇಜು11 ವಿದ್ಯಾರ್ಥಿಗಳು ದಾರಿ ತಪ್ಪಿದ ಘಟನೆ ನಡೆದಿದೆ.
ಬಲ್ಲಾಳರಾಯನ ದುರ್ಗಾ ಕಾಡಲ್ಲಿ ನಿತ್ರಾಣಗೊಂಡಿದ್ದ 11 ವಿದ್ಯಾರ್ಥಿಗಳು ಕೊನೆಗೂ ಮಧ್ಯರಾತ್ರಿ ಪತ್ತೆಯಾಗಿದ್ದಾರೆ
ಮೂಡಿಗೆರೆ ತಾಲೂಕಿನ ಬಲ್ಲಾಳರಾಯನದುರ್ಗಾದಲ್ಲಿ ಘಟನೆ ನಡೆದಿದೆ.
ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು, 5 ಹುಡುಗಿಯರು ಟ್ರಕ್ಕಿಂಗ್ ಬಂದಿದ್ದರು.
ಬಲ್ಲಾಳರಾಯನ ದುರ್ಗಾ ಕಡೆಯಿಂದ ಟಿಕೆಟ್ ಬುಕ್ ಮಾಡಿ, ಬಂಡಾಜೆ ಭಾಗದಿಂದ ಟ್ರಕ್ಕಿಂಗ್ ಆರಂಭಿಸಿದ್ದು,ದಾರಿ ತಿಳಿಯದೆ ಕಾಡಲ್ಲಿ ಅತಂತ್ರವಾಗಿ ನಿತ್ರಾಣ ಗೊಂಡಿದ್ದರು.
ಪೊಲೀಸರು-ಸ್ಥಳಿಯರು-ಅರಣ್ಯ ಇಲಾಖೆ ಸಿಬ್ಬಂದಿ 6 ಗಂಟೆ ಹುಡುಕಿ ಪತ್ತೆ ಹಚ್ಚಿದ್ದಾರೆ
ಬಾಳೂರು ಠಾಣಾಧಿಕಾರಿ ದಿಲೀಪ್ ಕುಮಾರ್ ಹಾಗೂ ಪೊಲೀಸರ ಜೊತೆ ಸ್ನೇಕ್ ಆರೀಫ್, ಮಧ್ಯರಾತ್ರಿ 2 ಗಂಟೆವರೆಗೂ ಶೋಧಿಸಿದ್ದಾರೆ.
ಕಾಡಲ್ಲಿ ಸಿಕ್ಕ ಅವರನ್ನ ಸುರಕ್ಷತವಾಗಿ ತಂದು ವಾಪಸ್ ಕಳುಹಿಸಿದ್ದಾರೆ

Leave a Reply

Your email address will not be published. Required fields are marked *

On Key

Related Posts

ಬಿಜೆಪಿಯಲ್ಲಿ ಮುಂದುವರಿದ ಸಂಘರ್ಷ :  ರಾಜೀನಾಮೆ ವಾಪಸ್ ಪಡೆದ ನಗರಸಭೆ ಅಧ್ಯಕ್ಷರು !!

ಚಿಕ್ಕಮಗಳೂರು: ದಿಡೀರ್ ವಿದ್ಯಮಾನದಲ್ಲಿ ನಗರಸಭೆ ಅಧ್ಯಕ್ಷರು ತಮ್ಮ ರಾಜೀನಾಮೆಯನ್ನು ಹಿಂದಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಪಕ್ಷದ ಆಂತರಿಕ ಒಪ್ಪಂದದಂತೆ ನಗರಸಭೆ ಅಧ್ಯಕ್ಷರು

ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ :  ಸಂಚಾರಿ ನಿಯಮ ಉಲ್ಲಂಘನೆ –  ದ್ವಿಚಕ್ರ ವಾಹನ ಚಾಲಕನಿಗೆ 14 ಸಾವಿರ ದಂಡ

ಚಿಕ್ಕಮಗಳೂರು: ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ , ಹಲವು ಸಂಚಾರಿ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಚಾಲಕನಿಗೆ

ರೈತರ ಸಮಾವೇಶ : ರೈತ–ಅರಣ್ಯ ಇಲಾಖೆ ಸಂಘರ್ಷ ತಪ್ಪಿಸಲು ಒಕ್ಕೊರಲ ಆಗ್ರಹ

ಚಿಕ್ಕಮಗಳೂರು: ಅರಣ್ಯ ಕಾಯ್ದೆಗಳ ಹೆಸರಿನಲ್ಲಿ ಜಿಲ್ಲೆಯ ರೈತರ ಬದುಕನ್ನು ಅರಣ್ಯ ಇಲಾಖೆ ಕಸಿದು ಕೊಳ್ಳುತ್ತಿದ್ದು ಅಂತಹ ಕಾಯ್ದೆಗಳನ್ನು ರದ್ದುಪಡಿಸಬೇಕು, ರೈತರನ್ನು

ಟ್ರಕ್ಕಿಂಗ್ : ದಾರಿ ತಪ್ಪಿದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು -ಮಧ್ಯರಾತ್ರಿ ಪತ್ತೆ

ಚಿಕ್ಕಮಗಳೂರು : ಟ್ರಕ್ಕಿಂಗ್ ಹೊರಟ ಮೆಡಿಕಲ್ ಕಾಲೇಜು11 ವಿದ್ಯಾರ್ಥಿಗಳು ದಾರಿ ತಪ್ಪಿದ ಘಟನೆ ನಡೆದಿದೆ. ಬಲ್ಲಾಳರಾಯನ ದುರ್ಗಾ ಕಾಡಲ್ಲಿ ನಿತ್ರಾಣಗೊಂಡಿದ್ದ