ಚಿಕ್ಕಮಗಳೂರು : ಟ್ರಕ್ಕಿಂಗ್ ಹೊರಟ ಮೆಡಿಕಲ್ ಕಾಲೇಜು11 ವಿದ್ಯಾರ್ಥಿಗಳು ದಾರಿ ತಪ್ಪಿದ ಘಟನೆ ನಡೆದಿದೆ.
ಬಲ್ಲಾಳರಾಯನ ದುರ್ಗಾ ಕಾಡಲ್ಲಿ ನಿತ್ರಾಣಗೊಂಡಿದ್ದ 11 ವಿದ್ಯಾರ್ಥಿಗಳು ಕೊನೆಗೂ ಮಧ್ಯರಾತ್ರಿ ಪತ್ತೆಯಾಗಿದ್ದಾರೆ
ಮೂಡಿಗೆರೆ ತಾಲೂಕಿನ ಬಲ್ಲಾಳರಾಯನದುರ್ಗಾದಲ್ಲಿ ಘಟನೆ ನಡೆದಿದೆ.
ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು, 5 ಹುಡುಗಿಯರು ಟ್ರಕ್ಕಿಂಗ್ ಬಂದಿದ್ದರು.
ಬಲ್ಲಾಳರಾಯನ ದುರ್ಗಾ ಕಡೆಯಿಂದ ಟಿಕೆಟ್ ಬುಕ್ ಮಾಡಿ, ಬಂಡಾಜೆ ಭಾಗದಿಂದ ಟ್ರಕ್ಕಿಂಗ್ ಆರಂಭಿಸಿದ್ದು,ದಾರಿ ತಿಳಿಯದೆ ಕಾಡಲ್ಲಿ ಅತಂತ್ರವಾಗಿ ನಿತ್ರಾಣ ಗೊಂಡಿದ್ದರು.
ಪೊಲೀಸರು-ಸ್ಥಳಿಯರು-ಅರಣ್ಯ ಇಲಾಖೆ ಸಿಬ್ಬಂದಿ 6 ಗಂಟೆ ಹುಡುಕಿ ಪತ್ತೆ ಹಚ್ಚಿದ್ದಾರೆ
ಬಾಳೂರು ಠಾಣಾಧಿಕಾರಿ ದಿಲೀಪ್ ಕುಮಾರ್ ಹಾಗೂ ಪೊಲೀಸರ ಜೊತೆ ಸ್ನೇಕ್ ಆರೀಫ್, ಮಧ್ಯರಾತ್ರಿ 2 ಗಂಟೆವರೆಗೂ ಶೋಧಿಸಿದ್ದಾರೆ.
ಕಾಡಲ್ಲಿ ಸಿಕ್ಕ ಅವರನ್ನ ಸುರಕ್ಷತವಾಗಿ ತಂದು ವಾಪಸ್ ಕಳುಹಿಸಿದ್ದಾರೆ
